BREAKING: ನಟ ದರ್ಶನ್‌ಗೆ ಜಾಮೀನು…!?

actor darshan incomtax

ಬೆಂಗಳೂರು: ನಟ ದರ್ಶನ್‌ಗೆ ಜಾಮೀನು ನೀಡುವಂತೆ ಇಂದು ನ್ಯಾಯಾಲಯದಲ್ಲಿ ಅವರ ಪರ ವಕೀಲರಾದ ಸಿ.ವಿ ನಾಗೇಶ್‌ ಅವರು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇಂದು ನ್ಯಾಯಾಲಯದಲ್ಲಿ ವಕೀಲರಾದ ಸಿ.ವಿ ನಾಗೇಶ್‌ ಅವರು ನ್ಯಾಯಾಧೀಶರ ಮುಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿರುವ ನಟ ದರ್ಶನ್‌ ಅವರ ಪರವಾಗಿ ವಾದ ಮಾಡುತ್ತ ತನಿಖಾಧೀಕಾರಿ ಒಬ್ಬರ ವಿಚಾರಣೇ ಮಾತ್ರ ಬಾಕಿ ಇದೇ, ಮತ್ತು ಇನ್ನಿಬ್ಬರ ವಿಚಾರಣೆ ಬಾಕಿ ಇದ್ದು, ಪಾಟಿಸಾವಲು ಬಾಕಿ ಇದೇ ಆರೋಪಿಗಳು ಸಾಕ್ಷಿಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಅವರಿಗೆ ಜಾಮೀನು ನೀಡಬೇಕು ಅಂಥ ಮನವಿ ಮಾಡಿಕೊಂಡರು. ಸಿ.ವಿ. ನಾಗೇಶ್‌, ನಟ ದರ್ಶನ್‌ ಪರವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಿರಿಯ ವಕೀಲರಾಗಿ ವಾದ ಮಂಡಿಸುತ್ತಿದ್ದಾರೆ,

ಇನ್ನೂ ನ್ಯಾಯಾಧೀಶರು ದರ್ಶನ್‌ ಪರ ವಕೀಲರ ಮನವಿಯನ್ನು ಆಲಿಸಿದ್ದು, ಈ ಬಗ್ಗೆ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಇದನ್ನು ಮಿಸ್‌ ಮಾಡದೇ ಓದಿ: toxic ನಟ ಯಶ್‌ ಅಭಿನಯದ ಸಿನಿಮಾದ ಟೀಸರ್‌ ಬಿಡುಗಡೆ

darshan and vijayalakshmi
darshan and vijayalakshmi

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನು ಸುಪ್ರೀಂ ಕೋರ್ಟ್‌ನಿಂದ ಮಾಡಿದ ಬಳಿಕ ಅವರು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಜೈಲಿನಲ್ಲಿದ್ದಾರೆ. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ದರ್ಶನ್‌ ಅಂಡ್ ಗ್ಯಾಂಗ್‌ ಕೊಲೆ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ. ತಮಗೆ ಅಶ್ಲೀಲ ಹಾಗೂ ಅಸಭ್ಯ ಕಮೆಂಟ್ ಮಾಡಿದ್ದವರ ವಿರುದ್ಧ ವಿಜಯಲಕ್ಷ್ಮಿ ದರ್ಶನ್ ಅವರು ದೂರು ನೀಡಿದ ಬಳಿಕ ದೂರು ದಾಖಲಿಸಿಕೊಂಡಿದ್ದ ಬೆಂಗಳೂರು ಪೊಲೀಸರು ನಾಗರಾಜ್ ತಳವಾರ, ಪ್ರಶಾಂತ್ ತಳವಾರ, ನಿತಿನ್, ಚಂದ್ರು ಎಂಬುವವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Actor Darshan granted bail