ಕಲಬುರ್ಗಿ : ಕಲಬುರ್ಗಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಅವರು ಸಾವನ್ನಪ್ಪಿದ್ದಾರೆ.
ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ದುರ್ಮರಣ ಹೊಂದಿದ್ದಾರೆ. ಜೇವರ್ಗಿ ಬಳಿಯಲ್ಲಿ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಂತ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: ಕಾರು ಅಪಘಾತದಲ್ಲಿ ‘IAS ಅಧಿಕಾರಿ ಮಹಾಂತೇಶ್ ಬೀಳಗಿ’ ದುರ್ಮರಣ
ಇದನ್ನು ಮಿಸ್ ಮಾಡದೇ ಓದಿ: ಪೋಷಕರೇ ಎಚ್ಚರ : ಆಟವಾಡುತ್ತಾ ನೀರು ತುಂಬಿದ್ದ ಟಬ್ ಗೆ ಬಿದ್ದು ಮಗು ಸಾ*ವು…!

ನಿನ್ನೆ ಜೇವರ್ಗಿ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಭೀಕರವಾದ ಕಾರು ಅಪಘಾತದಲ್ಲಿ ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಂತೇಶ್ ಬೀಳಗಿ ಅವರು ಸಾವನ್ನಪ್ಪಿದ್ದಾರೆ. ಇದೀಗ ಈ ಒಂದು ಅಪಘಾತದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಂತೇಶ ಸಂಬಂಧಿ ಬಸವರಾಜ್ ಅವರು ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ಠಾಣೆಗೆ ದೂರು ನೀಡಿದ್ದು ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಚಾಲಕನ ನಿರ್ಲಕ್ಷ್ಮ ಮತ್ತು ಅತಿ ವೇಗದಿಂದ ಅಪಘಾತ ಸಂಭವಿಸಿದೆ. ತಡೆಗೋಡೆಗೆ ಡಿಕ್ಕಿಯಾಗಿ ನಾಲ್ಕೈದು ಬಾರಿ ಕಾರು ಪಲ್ಟಿಯಾಗಿ ಬಿದ್ದಿದೆ. ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು ಆಸ್ಪತ್ರೆಯಲ್ಲಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ 281, 125,(A), 125 (B) 106 BNS ಸೆಕ್ಷನ್ ಅಡಿ ಕಾರ್ ಚಾಲಕ ಆರೋಕಿಯ ಅಂಥೋನಿ ರಾಜ್ ವಿರುದ್ಧ ದಾಖಲಾಗಿದೆ.
ಅಂದಹಾಗೇ ಮೃತ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರಸ್ತುತ ಬೆಸ್ಕಾಂ ಎಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಉತ್ತಮ ಅಧಿಕಾರಿಯೆಂದೇ ಗುರ್ತಿಸಿಕೊಂಡಿದ್ದಂತ ಮಹಾಂತೇಶ್ ಬೀಳಗಿ ಇಂದು ಅಪಘಾತದಲ್ಲಿ ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.

ಕರ್ನಾಟಕ ಕೇಡರ್ನ 2012 ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಮಹಾಂತೇಶ್ ಬೀಳಗಿ, ರಾಮದುರ್ಗದವರಾಗಿದ್ದು, ಕೆಎಸ್ಎಂಸಿಎಲ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ದಾವಣಗೆರೆಯ ಉಪ ಆಯುಕ್ತ ಮತ್ತು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಗರಾಭಿವೃದ್ಧಿ, ಕುಂದುಕೊರತೆ ಪರಿಹಾರ ಮತ್ತು ವಿದ್ಯುತ್ ಸರಬರಾಜು ನಿರ್ವಹಣೆಯನ್ನು ಸುಧಾರಿಸುವಲ್ಲಿ ಹೆಸರುವಾಸಿಯಾದ ಮಹಾಂತೇಶ್ ಬೀಳಗಿ , ನಾಗರಿಕ ಸೇವೆಗಳಿಗೆ ಸೇರುವ ಮೊದಲು ಧಾರವಾಡದಲ್ಲಿ ಇಂಗ್ಲಿಷ್ ಬೋಧಕರಾಗಿಯೂ ಕೆಲಸ ಮಾಡಿದ್ದರು.
IAS Officer Mahantesh Bilagi













Follow Me