ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ‌ ಅಕ್ಷರ ಬರೆದಿರುವುದು, ವಾಲ್ಮೀಕಿ ದರೋಡೆಕೋರ ಆಗಿದ್ದ ಎನ್ನುವುದು ಸುಳ್ಳು: ಸಿಎಂ ಸಿದ್ದರಾಮಯ್ಯ: CM Siddaramaiah

ಜಾತಿ ಮುಕ್ತ ಮಾನವೀಯ ಸಮಾಜ ನಿರ್ಮಾಣ ಮಾಡುವುದು ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆಯಾಗಿದೆ, ಆದರೆ ನಮ್ಮಲ್ಲಿ ಇಲ್ಲಿ ತನಕ ಅಸ್ಪೃಶ್ಯತೆ ಹೋಗಿಲ್ಲದಿರುವುದು, ಶೈಕ್ಷಣಿಕ ಸಮಾನತೆ ಸಾಧ್ಯವಾಗಿಲ್ಲದಿರುವುದುಕ್ಕೆ ದುರಂತವಾಗಿದೆ ಅಂತ ಹೇಳಿದರು.

Siddaramaiah
Image credit: https://www.facebook.com/Siddaramaiah.Official

ತುಮಕೂರು: ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ‌ ಅಕ್ಷರ ಬರೆದಿರುವುದು, ವಾಲ್ಮೀಕಿ ದರೋಡೆಕೋರ ಆಗಿದ್ದ ಎನ್ನುವುದು ಸುಳ್ಳು ಅಂಥ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಶನಿವಾರ ತುಮಕೂರಿನಲ್ಲಿ ನಡೆದ ಕುರುಬ ಸಾಂಸ್ಕೃತಿಕ ಪರಿಷತ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕುರುಬ ಸಮಾಜದ ಸಾಂಸ್ಕೃತಿಕ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Alert: ದೇಶದ ಜನತೆಗೆ ಪ್ರಧಾನಿ ಮೋದಿಯಿಂದ ಉಚಿತ ಏರ್ ಕಂಡೀಶನರ್‌..!?

Siddaramaiah
Image credit: https://www.facebook.com/Siddaramaiah.Official

ಇದೇ ವೇಳೆ ಅವರು ಕುರುಬ ಸಮುದಾಯದ ಸಂಸ್ಕೃತಿ ದರ್ಶನ ಮಾಲೆಯ 31 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಇನ್ನೂ ಇದೇ ವೇಳೆ ಅವರು ಮಾತನಾಡುತ್ತ, ಕಾಳಿದಾಸನ ನಾಲಿಗೆ ಮೇಲೆ ಬ್ರಹ್ಮ ಅಕ್ಷರ ಬರೆದಿದ್ದಕ್ಕೆ ಆತ ದೊಡ್ಡ ವ್ಯಕ್ತಿಯಾದ, ಹಾಗೂ ವಾಲ್ಮಿಕಿ ದರೋಡೆಕೋರನಾಗಿದ್ದ ಎನ್ನುವುದೆಲ್ಲ ಸುಳ್ಳು, ಶೂದ್ರರು ವಿದ್ಯಾವಂತರಾಗಿ ಏನಾದರೂ ಮಹತ್ವವಾದದ್ದನ್ನು ಬರೆದರೆ ಅದಕ್ಕೆ ಇಲ್ಲ ಸಲ್ಲದನ್ನು ಕಟ್ಟಿ ಹೇಳುತ್ತಾರೆ ಅಂತ ಕುಟುಕಿದರು.

Siddaramaiah
Image credit: https://www.facebook.com/Siddaramaiah.Official

ಇನ್ನೂ ಇದೇ ವೇಳೆ ಅವರು ಮಾತನಾಡುತ್ತ, ಜಾತಿ ಮುಕ್ತ ಮಾನವೀಯ ಸಮಾಜ ನಿರ್ಮಾಣ ಮಾಡುವುದು ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆಯಾಗಿದೆ, ಆದರೆ ನಮ್ಮಲ್ಲಿ ಇಲ್ಲಿ ತನಕ ಅಸ್ಪೃಶ್ಯತೆ ಹೋಗಿಲ್ಲದಿರುವುದು, ಶೈಕ್ಷಣಿಕ ಸಮಾನತೆ ಸಾಧ್ಯವಾಗಿಲ್ಲದಿರುವುದುಕ್ಕೆ ದುರಂತವಾಗಿದೆ ಅಂತ ಹೇಳಿದರು.ಇದೇ ವೇಳೇ ಅವರು ಮಾತನಾಡುತ್ತ, ವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತಿಸುವುದು ಅಗತ್ಯ. ಕಾಯಕ, ದಾಸೋಹ ಬಸವಣ್ಣನವರ ತತ್ವವನ್ನು ನಾವೆಲ್ಲ ಪಾಲಿಸಬೇಕು ಅಂತ ತಿಳಿಸಿದರು.

Siddaramaiah
Image credit: https://www.facebook.com/Siddaramaiah.Official

ಇನ್ನೂ ಇದೇ ವೇಳೆ ಅವರು ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು ಅಂತ ತಿಳಿಸಿದರು. ಇದಲ್ಲದೇ ಜಾತಿ ಮುಕ್ತ ಮಾನವೀಯ ಸಮಾಜ ನಿರ್ಮಾಣ ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆಯಾಗಿದೆ, ಆದರೆ ನಮ್ಮಲ್ಲಿ ಇವತ್ತಿಗೂ ಕೂಡ ಅಸ್ಪೃಶ್ಯತೆ ಹೋಗಿಲ್ಲದಿರುವುದು, ಶೈಕ್ಷಣಿಕ ಸಮಾನತೆ ಸಾಧ್ಯವಾಗಿಲ್ಲದಿರುವುದು ದುರಂತ ಅಂತ ಅವರು ಬೇಸರ ವ್ಯಕ್ತಪಡಿಸಿದರು.

ಇದನ್ನು ಓದಿ: IPL 2025, PBKS vs RCB Live Score: ರಾಜಸ್ಥಾನ ರಾಯಲ್ಸ್‌ಗೆ ಆರಂಭಿಕ ಆಘಾತ, ಆರ್‌ಸಿಬಿ ಬೌಲರ್‌ಗಳ ಅಬ್ಬರ…!

ಇದಲ್ಲದೇ ಪ್ರಗತಿಪರ ವಿಚಾರಗಳ ಜೊತೆ ನೀವು ಸದಾ ಗಟ್ಟಿಯಾಗಿ ನಿಲ್ಲಬೇಕು. ಪ್ರಗತಿಪರ ವಿಚಾರಗಳ ಜೊತೆಗೆ ನಾವು ನಿಲ್ಲದೆ ಸಮ ಸಮಾಜ ಬರಬೇಕು ಎಂದರೆ ಸಾಧ್ಯವಿಲ್ಲ ಅಂತ ಹೇಳಿದ, ಅವರು ಬಸವಣ್ಣ 850 ವರ್ಷಗಳ ಹಿಂದೆಯೇ ಅನುಭವ ಮಂಟಪ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು ಅಂತ ಅವರು ಬಸವಣ್ಣನವರ ಆಶಯವನ್ನು ಯಶಸ್ಸುಗೊಳಿಸಬೇಕು ಅಂತ ತಿಳಿಸಿದರು. ಇನ್ನೂ ಎಲ್ಲರೂ ಸಾಹಿತ್ಯ ರಚನೆಯಲ್ಲಿ ತೊಡಗಬೇಕು. ಹಿಂದೆ ಸಂಸ್ಕೃತ ಕಲಿಯುವವರಿಗೆ ಕಾದ ಸೀಸದ ಶಿಕ್ಷೆ ನಿಗದಿಯಾಗಿತ್ತು. ಆದರೆ ಈಗ ಶಿಕ್ಷಣ ಸಿಕ್ಕಿದೆ ಹಾಗಾಗಿ ಎಲ್ಲರೂ ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಅಂತ ತಿಳಿಸಿದರು.