ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಇತ್ತೀಚಿಗೆ ಅಧಿಕಾರಿಗಳ ವಿರುದ್ದ ಹರಿಹಾಯ್ದು ತಮ್ಮ ಸಿಟ್ಟನ್ನು ತೋರಿಸುತ್ತಿರುವ ಘಟನೆಗಳು ಹೆಚ್ಚುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸ್ಥಳದಲ್ಲಿದ್ದ ಎಸ್ಎಸ್ಪಿ ಮೇಲೆ ಸಿಟ್ಟಾದ ಘಟನೆ ನಡೆದಿದೆ.
ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಬೆಳಗಾವಿಯಲ್ಲಿ ಪ್ರತಿಭಟನೆ (Belagavi Protest) ನಡೆಸಿತು. ಈ ವೇಳೆ ಕಾಂಗ್ರೆಸ್ ಪ್ರತಿಭಟನೆಯ ಸ್ಥಳದತ್ತ ಬಿಜೆಪಿ ಮಹಿಳಾ ಕಾರ್ಯಕತೆರ್ಯರು (BJP Women Worker) ಸಿಎಂ ಮಾತನಾಡುತ್ತಿದ್ದ ಹಾಗೇ ಎದ್ದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ವೇಳೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಂಡರುಮ ಯಾರೋ ಅವನು ಎಸ್ಪಿ ಇಲ್ಲಿ.. ಏನ್ ಮಾಡ್ತಾ ಇದ್ದೀಯಾ…? ಎಂದು ಕೆಂಡಾಮಂಡಲವಾದ್ರು. ಅಲ್ಲದೇ, ಹತ್ತಿರಬಂದ ಎಎಸ್ಪಿ ನಾರಾಯಣ ಬರಮನಿಗೆ ಸಿಎಂ ಸಿದ್ದರಾಮಯ್ಯ ಕೈಎತ್ತಿ ಹೊಡೆಯುವ ರೀತಿಯಲ್ಲಿ ನಡೆದುಕೊಂಡರು.

ಈ ವೇಳೆ ಸಿಎಂ ಕೈಎತ್ತುತ್ತಿದ್ದಂತೆ ಹೆದರಿದ ಎಎಸ್ಪಿ, ಒಂದು ಹೆಜ್ಜೆ ಹಿಂದೆ ಹೋಗಿ ಸಿಎಂ ಅವಾಂತರವನ್ನು ನೋಡಿ ಅವಾಕ್ಕದರು. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭರಿತ ಟೀಕೆಗಳು ಕೇಳಿ ಬರುತ್ತಿದ್ದು, ಸಮಾಜವಾದಿ ಸಿದ್ರಾಮಯ್ಯ ಅವರು ನಡೆದುಕೊಳ್ಳುವುದು ದುರಾಂಹಕರ ಎನ್ನುತ್ತಿದ್ದಾರೆ.
Follow Me