ವಿಡಿಯೋ ನೋಡಿ: ವೇದಿಕೆಯಲ್ಲೇ ಎಎಸ್‌ಪಿ ಮೇಲೆ ಕೈಎತ್ತಿದ ಸಿಎಂ ಸಿದ್ದರಾಮಯ್ಯ, | CM Siddaramaiah

CM raises his hand on SP

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಇತ್ತೀಚಿಗೆ ಅಧಿಕಾರಿಗಳ ವಿರುದ್ದ ಹರಿಹಾಯ್ದು ತಮ್ಮ ಸಿಟ್ಟನ್ನು ತೋರಿಸುತ್ತಿರುವ ಘಟನೆಗಳು ಹೆಚ್ಚುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಸ್ಥಳದಲ್ಲಿದ್ದ ಎಸ್‌ಎಸ್‌ಪಿ ಮೇಲೆ ಸಿಟ್ಟಾದ ಘಟನೆ ನಡೆದಿದೆ.

ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಬೆಳಗಾವಿಯಲ್ಲಿ ಪ್ರತಿಭಟನೆ (Belagavi Protest) ನಡೆಸಿತು. ಈ ವೇಳೆ ಕಾಂಗ್ರೆಸ್ ಪ್ರತಿಭಟನೆಯ ಸ್ಥಳದತ್ತ ಬಿಜೆಪಿ ಮಹಿಳಾ ಕಾರ್ಯಕತೆರ್ಯರು (BJP Women Worker) ಸಿಎಂ ಮಾತನಾಡುತ್ತಿದ್ದ ಹಾಗೇ ಎದ್ದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

CM raises his hand on SP

ಈ ವೇಳೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಂಡರುಮ ಯಾರೋ ಅವನು ಎಸ್‌ಪಿ ಇಲ್ಲಿ.. ಏನ್ ಮಾಡ್ತಾ ಇದ್ದೀಯಾ…? ಎಂದು ಕೆಂಡಾಮಂಡಲವಾದ್ರು. ಅಲ್ಲದೇ, ಹತ್ತಿರಬಂದ ಎಎಸ್‌ಪಿ ನಾರಾಯಣ ಬರಮನಿಗೆ ಸಿಎಂ ಸಿದ್ದರಾಮಯ್ಯ ಕೈಎತ್ತಿ ಹೊಡೆಯುವ ರೀತಿಯಲ್ಲಿ ನಡೆದುಕೊಂಡರು.

CM raises his hand on SP

ಈ ವೇಳೆ ಸಿಎಂ ಕೈಎತ್ತುತ್ತಿದ್ದಂತೆ ಹೆದರಿದ ಎಎಸ್‌ಪಿ, ಒಂದು ಹೆಜ್ಜೆ ಹಿಂದೆ ಹೋಗಿ ಸಿಎಂ ಅವಾಂತರವನ್ನು ನೋಡಿ ಅವಾಕ್ಕದರು. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭರಿತ ಟೀಕೆಗಳು ಕೇಳಿ ಬರುತ್ತಿದ್ದು, ಸಮಾಜವಾದಿ ಸಿದ್ರಾಮಯ್ಯ ಅವರು ನಡೆದುಕೊಳ್ಳುವುದು ದುರಾಂಹಕರ ಎನ್ನುತ್ತಿದ್ದಾರೆ.