ಶಿರಸಿ ಮಾರಿಕಾಂಬಾ ಜಾತ್ರೆ 2026 : ವೈಭವದ ರಥೋತ್ಸವ ಆರಂಭ

sirsi-marikamba-rathotsava-2026

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿಯ ದ್ವೈವಾರ್ಷಿಕ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವೈಭವದ ರಥೋತ್ಸವವು ಬುಧವಾರ ಭಕ್ತಿ-ಸಂಭ್ರಮಗಳ ನಡುವೆ ಆರಂಭವಾಯಿತು.
ಬೆಳಿಗ್ಗೆ 9.15ಕ್ಕೆ ಮಾರಿಕಾಂಬಾ ದೇವಾಲಯದ ಆವರಣದಿಂದ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ‘ಉಧೋ ಉಧೋ ಮಾರಮ್ಮ’, ‘ಜೈ ಮಾರಿಕಾಂಬೆ’ ಎಂದು ಘೋಷಣೆ ಕೂಗುತ್ತಾ ದೇವಿಯ ಕೃಪೆಗೆ ಪಾತ್ರರಾದರು. ರಥ ಸಾಗುವ ಹಾದಿಯುದ್ದಕ್ಕೂ ಭಕ್ತರು ಹೂವುಗಳನ್ನು ಚೆಲ್ಲಿ ಸ್ವಾಗತಿಸಿದರು. ಹರಕೆ ಹೊತ್ತ ಭಕ್ತರು ಬಾಳೆಹಣ್ಣು ಮತ್ತು ಕೋಳಿಗಳನ್ನು ರಥಕ್ಕೆ ಎಸೆಯುವ ಮೂಲಕ ಶ್ರದ್ಧಾಭಕ್ತಿ ಮೆರೆದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಕಲಾ ತಂಡಗಳ ಮೆರಗು: ರಥೋತ್ಸವದ ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಹತ್ತಾರು ಕಲಾ ತಂಡಗಳು ಭಾಗವಹಿಸಿ, ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿದವು. ಭಕ್ತರು ಭಾವಪರವಶರಾಗಿ ಮೈಮೇಲೆ ಕುಂಕುಮ, ಭಂಡಾರ ಹಾಗೂ ಅಡಿಕೆ ಸಿಂಗಾರವನ್ನು ಸುರಿದುಕೊಂಡು ದೇವಿಯ ಮೇಲಿನ ಭಕ್ತಿಯನ್ನು ಪ್ರಕಟಿಸಿದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದೇವಿಯ ಮೂರ್ತಿಯನ್ನು ಜಾತ್ರಾ ಗದ್ದುಗೆಯಲ್ಲಿ ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಗುವುದು. ಇಂದಿನಿಂದ ಆರಂಭವಾಗುವ ಜಾತ್ರೆಯು ಇಡೀ ನಗರವನ್ನು ಹಬ್ಬದ ಕಳೆ ತಂದಿದೆ.

Sirsi Marikamba Jatre 2026