ಶಿವಮೊಗ್ಗ: ಉಗ್ರರ ದಾಳಿಗೆ ಲಿಯಾದ ಮಂಜುನಾಥ ಅವರ ಪಾರ್ಥೀವ ಶರೀರ ನಾಳೆ ಶಿವಮೊಗ್ಗಕ್ಕೆ ಬೆಳಗ್ಗೆ 9 ಆಗಮಿಸಲಿದೆ ಅಂತ ಶಿವಮೊಗ್ಗ ನಗರ ಶಾಸಕ ಶಾಸಕ ಚೆನ್ನಬಸಪ್ಪ ಅವರು ಮಾಹಿತಿ ನೀಡಿದ್ದಾರೆ.
ಅವರು ಇಂಧು ಮೃತ ಮಂಜುನಾಥ್ ಅವರ ಮನೆಯ ಬಳಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ನಾಳೆ ಪಾರ್ಥಿವ ಶರೀರ ಬಂದ ಕೂಡಲೇ ಪಾರ್ಥೀವ ಶರೀರದ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು. ನಾಳೆ ಸ್ವಯಂ ಪ್ರೇರಿತವಾಗಿ ವರ್ತಕರು ಭಯೋತ್ಪದಕರ ಘಟನೆ ಖಂಡಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಲಿದ್ದಾರೆ ಅಂತ ತಿಳಿಸಿದರು.

ಇನ್ನೂ ನಾಳೆ ಸುಮಾರು ಮಧ್ಯಾಹ್ಮ 12-30 ಕ್ಕೆ ಧಾರ್ಮಿಕ ವಿಧಿವಿಧಾನ ನಡೆದು ಪಾರ್ಥೀವ ಶರೀರದ ಅಂತಿಮ ಯಾತ್ರೆ ಶುರುವಾಗಲಿದ್ದು, ಐಬಿ ವೃತ್ತ ಕುವೆಂಪು ರಸ್ತೆ, ಜೈಲ್ ವೃತ್ತ, ಗೋಪಿ ವೃತ್ತ, ನೆಹರೂ ರಸ್ತೆ, ಶಿವಪ್ಪ ನಾಯಕ ವೃತ್ತ ಮೂಲಕ ಬಿಹೆಚ್ ರಸ್ತೆ, ಹೊಳೆ ಬಸ್ ಸ್ಟಾಪ್ ಮೂಲಕ ರೋಟರಿ ಚಿತಾಗಾರವನ್ನು ತಲುಪಲಿದೆ. ಅಲ್ಲಿ ಸೂರ್ಯಭಟ್ಟರ ಮಗ ಗುಂಡಾಭಟ್ ಧಾರ್ಮಿಕ ವಿಧಿವಿಧಾನ ಕಾರ್ಯವಿಧಾನಗಳನ್ನು ನಡೆಸಿಕೊಡಲಿದ್ದಾರೆ ಅಂಥ ತಿಳಿಸಿದರು.
ಇದಲ್ಲದ ನಾಳೇ ಅಂತಿಮ ವಿಧಿ ವಿಧಾನ ಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಭಾಗವಹಿಸಲಿದ್ದಾರೆ ಅಂತ ಮಾಹಿತಿ ನೀಡಿದರು.

ನಾಳೆ ಬೆಳಗ್ಗಿನ ಜಾವ 3 ಗಂಟೆಗೆ ಬೆಂಗಳೂರಿನಿಮದ ಪಾರ್ಥೀವ ಶರೀರ ಹೊರಡಲಿದ್ದು, ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗಕ್ಕೆ ಪಾರ್ಥೀವ ಶರೀರ ಆಗಮಿಸುವ ಸಂಭವಿದ್ದು, ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಂಜುನಾಥ್ ಅವರ ಮನೆ ಬಳಿ ನಡೆಸಿಕೊಳ್ಳಲಾಗುತ್ತಿದೆ ಅಂತ ತಿಳಿದು ಬಂದಿದೆ.
Follow Me