ಬೆಂಗಳೂರು: 65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ಸಂಧ್ಯಾ ಸುರಕ್ಷಾ ಯೋಜನೆ (Sandhya Suraksha Yojana) ಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಈ ಮೂಲಕ ಹಿರಿಯ ಜೀವಗಳಿಗೆ ನೆಮ್ಮದಿಯ ಜೀವನವನ್ನು ನಡೆಸಲು ಅವಕಾಶ ನೀಡಿದೆ.
ದಿನಾಂಕ:2-7-2007 ರಿಂದ ಮಾಸಾಶನವನ್ನು ರಾಜ್ಯ ಸರ್ಕಾರವು ಪ್ರಾರಂಭಿಸಲಾಗಿದೆ. ಕೆಳಕಂಡ ವ್ಯಕ್ತಿಗಳು ಈ ಮಾಸಾಶನವನ್ನು ಅರ್ಹರಾಗಿರುತ್ತಾರೆ ಮತ್ತು ಇದನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಮಿಸ್ ಮಾಡದೇ ಓದಿ:
ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳಾದ ಸೋಫಿಯಾ ಖುರೇಷಿ ಮತ್ತು ವ್ಯೋಮಿಕಾ ಸಿಂಗ್ ಯಾರು ಗೊತ್ತಾ?
ಹಾಗಾದ್ರೇ ಯಾರು ಯಾರು ಪಡೆದುಕೊಳ್ಳುವುದಕ್ಕೆ ಅರ್ಹರು?
1) ಸಣ್ಣ ರೈತರು
2) ಅತೀ ಸಣ್ಣ ರೈತರು
3) ಕೃಷಿ ಕಾರ್ಮಿಕರು
4) ನೇಕಾರರು
5) ಮೀನುಗಾರರು
6) ಅಸಂಘಟಿತ ವಲಯದ ಕಾರ್ಮಿಕರು ಆದರೆ ct, 1996 ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಇದಲ್ಲದೇ ವೈದ್ಯಕೀಯ ಸೌಲಭ್ಯ ಸೇರಿದಂತೆ ಹಲವು ಪ್ರಯೋಜನಗಳು ಈ ಯೋಜನೆಯಡಿ ಸಿಗಲಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಫಲಾನುಭವಿಗಳಿಗೆ 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾವನ್ನು ಹೊಂದಿರಬೇಕು.

ವೈದ್ಯಕೀಯ ಸೌಲಭ್ಯ (Medical Facility) ಸೇರಿದಂತೆ ಹಲವು ಪ್ರಯೋಜನಗಳು ಈ ಯೋಜನೆಯಡಿ ಲಭ್ಯವಾಗಲಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಫಲಾನುಭವಿಗಳಿಗೆ 65 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
ಇದನ್ನು ಮಿಸ್ ಮಾಡದೇ ಓದಿ: ತುಟಿ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ
ಇದಕ್ಕೆ ಅರ್ಹತಾ ಮಾನದಂಡ ಇರುವುದು ಏನು?
1. ಪತಿ, ಪತ್ನಿಯ ಒಟ್ಟಾರೆ ವಾರ್ಷಿಕ ಆದಾಯ ರೂ.32,000/- ಕ್ಕಿಂತ ಹೆಚ್ಚಿಗೆ ಇರಬಾದರು.
2. ಫಲಾನುಭವಿಗಳು ಪತಿ ಅಥವಾ ಪತ್ನಿಯ ಇಬ್ಬರು ಠೇವಣಿ ಮೌಲ್ಯ ರೂ.10.000ಕ್ಕಿಂತ ಹೆಚ್ಚಿಗೆ ಇರಬಾರದು.
3. ಯಾವುದೇ ರೀತಿಯ ಪಿಂಚಣಿಯನ್ನು ಸಾರ್ವಜನಿಕ/ಖಾಸಗಿ ಮೂಲದಿಂದ ಇಬ್ಬರು ಕೂಡ ಪಡೆಯುತ್ತಿರಬಾರದು.
4. ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಸಹ ಇವರುಗಳು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಯೋಜನೆಯಡಿ ಮಾಸಾಶನಕ್ಕೆ (Pension Scheme ) ಅವರು ಅರ್ಹರಾಗಿದ್ದಾರೆ

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲೆಗಳು:
1. ವಾಸಸ್ಥಳ ದೃಡೀಕರಣ ಪತ್ರ
2. ವಯಸ್ಸಿನ ದೃಢೀಕೃತ ದಾಖಲೆ
3. ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು
4. ಆಧಾರ್ ಕಾರ್ಡ್ (Aadhaar Card)
5. ಪಡಿತರ ಚೀಟಿ ಸಂಖ್ಯೆ (Ration Card) ಮತ್ತೊಂದು ಅಗತ್ಯವಿರುವ ದಾಖಲೆಯೆಂದರೆ ಸಂಬಂಧಿತ ತಾಲ್ಲೂಕಿನ ತಹಶೀಲ್ದಾರ್ ಸಹಿ ಮಾಡಬೇಕಾದ ವೃತ್ತಿಪರ ಪ್ರಮಾಣಪತ್ರ.
ಪಿಂಚಣಿ ಮೊತ್ತ (Pension Amount): 1200
Follow Me