ಬೆಂಗಳೂರು: ತಿಮ್ಮಾಪುರ್ಗೆ ಚಡ್ಡಿ ಬಿಚ್ಚಿ ಚೆಕ್ ಮಾಡ್ಬೇಕಿತ್ತು ಅಂತ ಅಬಕಾರಿ ಸಚಿವ ಆರ್ ಬಿ ತಿಮ್ಮಪುರ್ ಬಗ್ಗೆ ಸಂಸದ ತೇಜಸ್ವಿ ಸೂರ್ಯ ವಿವಾದತ್ಮಕ ಹೇಳಿಕೆ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ,
ಅವರು ಅಬಕಾರಿ ಸಚಿವ ಆರ್ ಬಿ ತಿಮ್ಮಪುರ್ ಹಿಂದೂಗಳೆಂದು ನೋಡಿ ಕೊಲೆ ಮಾಡಿಲ್ಲ ಅಂತ ಹೇಳಿದ್ದ ಹೇಳಿಕೆ ಸಂಬಂಧಪಟ್ಟಂತೆ ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು, ಇದೇ ವೇಳೆ ಅವರು ಮಾತನಾಡುತ್ತ, ಪಕ್ಕದ ರಾಜ್ಯದಲ್ಲಿ ಆನೆ ದಾಳಿಗೆ ಬಲಿಯಾದವರಿಗೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ನೀಡುತ್ತದೆ, ಅದೇ ನಮ್ಮ ರಾಜ್ಯದ ಜನ ಭಯೋತ್ಪದಕರ ಗುಂಡೇಟಿಗೆ ಬಲಿಯಾದೆ 10 ಲಕ್ಷ ಕೊಟ್ಟಿದ್ದಾರೆ ಎಂದು ರಾಜ್ಯ ಸರ್ಕಾದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಅವರು ಮಾತನಾಡುತ್ತ ರಾಜ್ಯ ಸರ್ಕಾರಕ್ಕೆ ಕನಿಷ್ಠ ಮಾನವೀಯತೆ ಇದ್ದರೆ 1 ಕೋಟಿ ಕೊಡಬೇಕಿತ್ತು ಅಂತ ಆಗ್ರಹಿಸಿದರು. ಇದಲ್ಲದೇ ಮಂಜುನಾಥ ಮಗನಿಗೆ ಆರ್ವಿ ಇನ್ಸ್ಟಿಟ್ಯೂಟ್ಲ್ಲಿ ಸೀಟ್ ಕೊಡ್ತಾ ಇದ್ದೇವೆ. ಹಾಗೆ CBS ಶಿಕ್ಷಣವನ್ನು ಭರತ್ ಮಗುವಿಗೆ ಟ್ರಾನ್ಸೆಂಡ್ ಶಾಲೆಯಲ್ಲಿ ಫ್ರೀ ಆಗಿ ಕೊಡ್ತಾರೆ. 1ನೇ ತರಗತಿ ಇಂದ ಪಿಯುಸಿ ತನಕ ಫ್ರೀ ಶಿಕ್ಷಣ ಕೊಡ್ತಾರೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

Follow Me