B.Z. Zameer Ahmed Khan: ನಾಳೆ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಜಮೀರ್ ಸಂದೇಶ

B.Z. Zameer Ahmed Khan

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ‌ ಭಯೋತ್ಪಾದಕ ದಾಳಿಗೆ ಭಾರತ ಆಪರೇಷನ್ ಸಿಂಧೂರ (Operation Sindhura) ಎನ್ನುವ ಹೆಸರಿನಡಿಯಲ್ಲಿ ಪಾಕ್‌ ಮೇಲೆ ಭಾರತದ (india) ಸೇನೆ ಮುಗಿ ಬೀಳುತ್ತಿದ್ದು, ಪಾಕ್‌ಗೆ ನಡುಕ ಹುಟ್ಟಿಸಿದೆ.

ಈ ನಡುವೆ ಮೊನ್ನೆ ಸಿಂಧೂರದ ಭಾಗವಾಗಿ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲು ಸೂಚನೆ ನೀಡಿದ್ದಾರೆ. ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲು ಸಚಿವ ರಾಮಲಿಂಗರೆಡ್ಡಿಯವರು ಆದೇಶದಂತೆ ರಾಜ್ಯದ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದೆ.

Zameer Ahmed

ಈ ನಡುವೆ ನಾಳೆ ಶುಕ್ರವಾರ(may 09) ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸಚಿವ ಬಿ ಝಡ್ ಜಮೀರ್ ಅಹ್ಮದ್ (Minister B Z Zameer Ahmed) ಅವರು ವಕ್ಫ್ ಬೋರ್ಡ್ ಸಿಇಒಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ ಅಂತ ತಿಳಿದು ಬಂದಿದೆ.

Zameer Ahmed

ಪತ್ರದಲ್ಲಿ ಅವರು ಉಲ್ಲೇಖ ಮಾಡಿರುವಂತೆ ಕಾಶ್ಮೀರ ಕಣಿವೆಯ ಪಹಲ್ಯಾಮ್‌ನಲ್ಲಿ ಉಗ್ರಗಾಮಿಗಳು 26 ಭಾಗತೀಯ ವುವಾಸಿಗರನ್ನು ಹತ್ಯೆಗೈದ ಹಿನ್ನಲೆಯಲ್ಲಿ ಭಾರತೀಯ ಸೈನ್ಯ (Indian Army) “ಅಪರೇಷನ್ ಸಿಂಧೂರ” ಎಂಬ ಹೆಸರಿನಲ್ಲಿ ನಡೆಸಿದ ದಾಳಿಯಲ್ಲಿ. ಉಗ್ರರ ನಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಲಾಗಿದೆ. ಭಯೋತ್ಪಾದಕರನ್ನು ದಮನ ಮಾಡಿ ದೇಶದ ಶಾಂತಿಗೆ ಮುಂದಾಗುತ್ತಿರುವ ನಮ್ಮ ಹೆಮ್ಮಯ ದೇಶದ ಸೈನಿಕರಿಗೆ ಶಕ್ತಿ ತುಂಬಲು ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ಎಕ್ಸ್‌ಗೆ ಸೇರಿದ ಮಸೀದಿಗಳಲ್ಲಿ ಹಾಗೂ ಇತರೆ ಮಸೀದಿಗಳಲ್ಲಿ ಪ್ರಾರ್ಥಿಸಲು ಸೂಕ್ತ ಸೂಚನ ನೀಡಲು ಸೂಚಿಸಿದೆ ಅಂತ ತಿಳಿಸಿದ್ದಾರೆ.

Zameer Ahmed