Election results 2025 kerala | ’ಧನ್ಯವಾದಗಳು ತಿರುವನಂತಪುರಂ’ – ಕೇರಳದ ಜನತೆ ಧನ್ಯವಾದ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ

Prime Minister Narendra Modi
Prime Minister Narendra Modi

ಕೊಚ್ಚಿ: ಕೇರಳದ 1,199 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ ನಂತರ ಇವಿಎಂ ಮತಗಳನ್ನು ಎಣಿಸಲಾಗಿದೆ.

ರಾಜ್ಯ ಚುನಾವಣಾ ಆಯೋಗವು (SEC) ಆಡಳಿತಾರೂಢ ಎಲ್‌ಡಿಎಫ್, ವಿರೋಧ ಪಕ್ಷವಾದ ಯುಡಿಎಫ್ ಮತ್ತು ಎನ್‌ಡಿಎ ವಿವಿಧ ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್, ಮುನ್ಸಿಪಾಲಿಟಿ ಮತ್ತು ಕಾರ್ಪೊರೇಷನ್ ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸುವ ಆರಂಭಿಕ ಪ್ರವೃತ್ತಿಗಳನ್ನು ವರದಿ ಮಾಡಿದೆ. 244 ಕೇಂದ್ರಗಳು ಮತ್ತು 14 ಜಿಲ್ಲಾಧಿಕಾರಿಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

ಇದನ್ನು ಮಿಸ್‌ ಮಾಡದೇ ಓದಿ: ಅಂತರ್ಜಾತಿ ವಿವಾಹ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ: ಧನಸಹಾಯ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ

ಇದನ್ನು ಮಿಸ್‌ ಮಾಡದೇ ಓದಿ: SBI ಬ್ಯಾಂಕ್‌ನಲ್ಲಿ FD ಇಟ್ಟವರಿಗೆ ಬಿಗ್‌ಶಾಕ್‌, ಬಡ್ಡಿ ದರದಲ್ಲಿ ಇಳಿಕೆ, ಇಲ್ಲಿದೆ ನೂತನ ಪರಿಷ್ಕಪಟ್ಟಿ

Prime Minister Narendra Modi
Prime Minister Narendra Modi

ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ-ಎನ್‌ಡಿಎ ಪಡೆದ ಜನಾದೇಶವು ಕೇರಳದ ರಾಜಕೀಯದಲ್ಲಿ ಒಂದು ಆನಂದದ ಕ್ಷಣವಾಗಿದೆ ಎಂದು ಐತಿಹಾಸಿಕ ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್‌ ಮಾಡಿರುವ ಅವರು ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಹಾಕಿದ ಕೇರಳದ ಜನತೆಗೆ ನನ್ನ ಕೃತಜ್ಞತೆಗಳು. ಕೇರಳ ಯುಡಿಎಫ್ ಮತ್ತು ಎಲ್ ಡಿಎಫ್ ನಿಂದ ಬೇಸತ್ತಿದೆ. ಉತ್ತಮ ಆಡಳಿತವನ್ನು ನೀಡಲು ಮತ್ತು ಎಲ್ಲರಿಗೂ ಅವಕಾಶಗಳನ್ನು ಹೊಂದಿರುವ #ವಿಕಸಿತ ಕೇರಳವನ್ನು ನಿರ್ಮಿಸುವ ಏಕೈಕ ಆಯ್ಕೆಯಾಗಿ ಅವರು ಎನ್‌ಡಿಎಯನ್ನು ನೋಡುತ್ತಾರೆ ಅಂತ ತಿಳಿಸಿದ್ದಾರೆ.

‘Thank you Thiruvananthapuram’ – Prime Minister Narendra Modi thanked the people of Kerala