ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi ) ಅವರು ಭಗವಾನ್ ರಾಮ (rama) ಸೇರಿದಂತೆ ಭಾರತೀಯ ದೇವತೆಗಳನ್ನು ಪೌರಾಣಿಕ ವ್ಯಕ್ತಿಗಳು ಎಂದು ಉಲ್ಲೇಖಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಅಮೆರಿಕದ (America) ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದು, ಈಗ ಅದು ವಿವಾದಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ಕ್ಲಿಪ್ನಲ್ಲಿ, ರಾಹುಲ್ ಗಾಂಧಿ ಹೀಗೆ ಹೇಳುತ್ತಿರುವುದು ಕೇಳಿಸುತ್ತದೆ, ಎಲ್ಲರೂ ಪೌರಾಣಿಕ ವ್ಯಕ್ತಿಗಳು; ಭಗವಾನ್ ರಾಮನು ಆ ರೀತಿಯವನು, ಅವನು ಕ್ಷಮಿಸುತ್ತಿದ್ದನು, ಅವನು ಸಹಾನುಭೂತಿಯುಳ್ಳವನಾಗಿದ್ದನು ಅಂತ ಹೇಳಿದ್ದಾರೆ.

ಈ ನಡುವೆ ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಹಲವಾರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿದರು. ವೀಡಿಯೊದ ಒಂದು ಭಾಗವನ್ನು ಹಂಚಿಕೊಂಡ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಭಗವಾನ್ ರಾಮನ ಅಸ್ತಿತ್ವವನ್ನು ಅನುಮಾನಿಸಿದ್ದಕ್ಕಾಗಿ ದೇಶವು ಗಾಂಧಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.

ಬಿಜೆಪಿ ವಕ್ತಾರ ಸಿ.ಆರ್.ಕೇಶವನ್ ಕೂಡ ರಾಹುಲ್ ಗಾಂಧಿ ಅವರ ಹೇಳಿಕೆಯ ತುಣುಕನ್ನು ಹಂಚಿಕೊಂಡಿದ್ದು, “ರಾಹುಲ್ ಗಾಂಧಿ ನೇತೃತ್ವದ ಯುಪಿಎ ಸರ್ಕಾರ (2007) ರಾಮನ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದರು ಅಥವಾ ಅವರು ಯಾವ ಸೇತುವೆಯನ್ನು ನಿರ್ಮಿಸಿದರು ಎಂದು ಹೇಳುವ ಇತಿಹಾಸವಿಲ್ಲ ಎಂದು ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ ಭಗವಾನ್ ರಾಮನನ್ನು ಲೇವಡಿ ಮಾಡಿದೆ.

Follow Me