ನವದೆಹಲಿ: ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳು ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳನ್ನು ಭಾರತ ಸೋಮವಾರ ನಿಷೇಧಿಸಿದೆ. ಇದು ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಅಂತ ತಿಳಿದು ಬಂದಿದೆ. ಈ ಮೂಲಕ ಪಾಕ್ ಮೇಲೆ ಕೇಂದ್ರ ಸರ್ಕಾರ ಸೈಬರ್ ದಾಳಿ ಮಾಡಿದೆ.

ಪಾಕಿಸ್ತಾನದ ಜನಪ್ರಿಯ ಸುದ್ದಿ ಚಾನೆಲ್ಗಳಾದ ಡಾನ್ ನ್ಯೂಸ್, ಜಿಯೋ ನ್ಯೂಸ್, ಬೋಲ್ ನ್ಯೂಸ್, ಎಆರ್ವೈ ನ್ಯೂಸ್, ಸಮಾ ಟಿವಿ ಮತ್ತು ಸುನೋ ನ್ಯೂಸ್ ಸೇರಿದಂತೆ ನಿಷೇಧಿಸಲಾದ ಚಾನೆಲ್ಗಳ ಪಟ್ಟಿಯನ್ನು ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಇದಲ್ಲದೆ ಪಾಕಿಸ್ತಾನಿ ಪತ್ರಕರ್ತರ ಹಲವಾರು ಚಾನೆಲ್ಗಳನ್ನು ಸಹ ನಿರ್ಬಂಧಿಸಲಾಗಿದೆ. ನಿಷೇಧಿತ ಇತರ ಹ್ಯಾಂಡಲ್ಗಳಲ್ಲಿ ಉಜೈರ್ ಕ್ರಿಕೆಟ್, ದಿ ಪಾಕಿಸ್ತಾನ್ ರೆಫರೆನ್ಸ್, ರಜಿ ನಾಮಾ ಮತ್ತು ಸಮಾ ಸ್ಪೋರ್ಟ್ಸ್ ಸೇರಿವೆ.
ಈ ನಡುವೆ ಬಿಬಿಸಿ ಪ್ರಕಟಿಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸುದ್ದಿ ಲೇಖನದ ಬಗ್ಗೆ “ಬಲವಾದ ಭಾವನೆಗಳನ್ನು” ಅದು ವ್ಯಕ್ತಪಡಿಸಿದೆ ಮತ್ತು ಭಯೋತ್ಪಾದಕರನ್ನು “ಬಂಡುಕೋರರು” ಎಂದು ಕರೆದು ಸುದ್ದಿ ಮಾಡಿದಕ್ಕೆ ಸುದ್ದಿಗೆ ಸಂಬಂಧಪಟ್ಟಂತೆ ಔಪಚಾರಿಕ ಪತ್ರ ಬರೆಯಲಾಗಿದೆ ಎಂದು ಹೇಳಿದೆ. ಬಿಬಿಸಿಯ ವರದಿಯನ್ನು ಮೇಲ್ವಿಚಾರಣೆ ಮಾಡಲಾಗುವುದು ಅಂತ ಇದೇ ವೇಳೆ ಕೇಂದ್ರ ಸರ್ಕಾರ ತಿಳಿಸಿದೆ.

ಈ ನಡುವೆ ಭಾರತವನ್ನು ತೊರೆಯಲು ಕೇಳಲಾದ ಪಾಕಿಸ್ತಾನಿ ಪ್ರಜೆಗಳಿಗೆ ನಕಲಿ ಐಡಿಗಳ ಉತ್ಪಾದನೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾದ ಲಕ್ನೋದ ಆಧಾರ್ ಸೇವಾ ಕೇಂದ್ರದ (ಎಎಸ್ಕೆ) ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಪಾಕ್ ವಿರುದ್ದ ಎಲ್ಲಾ ತೆರನಾದ ತೀವ್ರವಾದ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ. ಇನ್ನೂ ಘಟನೆಯಲ್ಲಿ ಇ 26 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಹಲವಾರು ಜನರು ಗಾಯಗೊಂಡಿದ್ದಾರೆ. ಈ ನಡುವೆ ಘಟನೆ ನಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ದಾಳಿಯ ನಂತರ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ.
Follow Me