ಹಾಸನ: ತಾಳಿ‌ ಕಟ್ಟುವ ಸಮಯದಲ್ಲಿ ವಧು ಮದುವೆ (marriage) ಬೇಡ್ವೇ ಬೇಡ ಅಂತ ಹಠ ಮಾಡಿರುವ ಘಟನೆ ಹಾಸದನಲ್ಲಿ ನಡೆದಿದೆ. ಹಾಸನದಲ್ಲಿ ಇಂದು ಅವರಿಬ್ಬರು ಮದುವೆಯಾಗಿ ಮುಂದಿನ ಜೀವನಕ್ಕೆ ಪಾದಾರ್ಪಣೆ ಮಾಡಬೇಕು ಆಗಿತ್ತು, ಆದರೆ ಮದುವೆಗು ಮುನ್ನವೇ ಲವ್ವಿ ಡಬ್ಬಿ ಅಂತ ಹೇಳಿ ಸುತ್ತಾಡಿ, ಕೊನೆಗೆ ತಾಳಿ ಕಟ್ಟುವ ವೇಳೆಯಲ್ಲಿ ಕಣ್ಣೀರಿಟ್ಟು ನನಗೆ ಮದುವೆ ಬೇಡ ಅಂತ ಹೇಳಿದ ಘಟನೆ ನಡೆದಿದೆ.  ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ಇಂದು ನಡೆಯಬೇಕಾಗಿತ್ತು, ಆದರೆ ಆ ಹುಡುಗಿ ...

ಬೆಂಗಳೂರು: ವಿದೇಶಿ ಬಾತುಕೋಳಿ ಸಾಕಿದ್ದ ನಟ ದರ್ಶನ್‌ ಮತ್ತು ಆತನ ಪತ್ನಿ ವಿಜಯ್ ಲಕ್ಷ್ಮಿ, ಹಾಗೂ ತೋಟವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜ್‌ ಅವರ ವಿರುದ್ದ ದೂರು ದಾಖಲಾಗಿತ್ತು. ಇದೇ ವೇಳೇ ಪ್ರಕರಣ ಸಂಬಂಧ ಜುಲೈ 4ರಂದು ವಿಚಾರಣೆಗೆ ಹಾಜರಾಗುವಂತೆ ಟಿ.ನರಸೀಪುರ ಕೋರ್ಟ್‌ನಿಂದ ಸಮನ್ಸ್‌ ಜಾರಿಯಾಗಿದೆ ಎನ್ನಲಾಗಿದೆ.  ಎರಡು ವರ್ಷದ ಹಿಂದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಡಬ್ಲ್ಯುಪಿಎನ ಶೆಡ್ಯೂಲ್ 2ರ ಅಡಿಯಲ್ಲಿ ಬರುವ 4 ಬಾರ್ ಹೆಡೆಡ್ ಬಾತುಗಳನ್ನು ದರ್ಶನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕುತ್ತಿದ್ದರು. ಪಕ್ಷಿಗಳನ್ನು ವಶಪಡಿಸಿಕೊಂಡಿದ್ದ ಅರಣ್ಯಾಧಿಕಾರಿಗಳು ನಂತರ ನ್ಯಾಯಾಲಯದ ...

ಮಂಗಳೂರು: ಮದುವೆ ಮಾಡಿಸಿದ್ದ ಬ್ರೋಕರರನ್ನೇ ವ್ಯಕ್ತಿಯೊಬ್ಬ ಕೊ**ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ವಳಚ್ಚಿಲ್​ನಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಬ್ರೋಕರ್​ ಸುಲೇಮಾನ್​ ತನ್ನ ಸಂಬಂಧಿ ಯುವತಿಯನ್ನು ಮುಸ್ತಫಾ ಎನ್ನುವರಿಗೆ ಮದುವೆ ಮಾಡಿಸಿದ್ದ ಎನ್ನಲಾಗಿದೆ.  ಇಬ್ಬರ ಜೀವನದಲ್ಲಿ ಕೆಲ ತಿಂಗಳಿಂದ ಜಗಳ ಆರಂಭವಾಗಿತ್ತು. ಎರಡು ತಿಂಗಳ ಹಿಂದೆ ಯುವತಿ ಮುಸ್ತಫಾನನ್ನು ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ಈ ವೇಳೆ ರಾಜಿ-ಸಂಧಾನಕ್ಕೆ ಸುಲೇಮಾನ್​ ನಿನ್ನೆ(ಮೇ.22) ರಾತ್ರಿ ಮುಸ್ತಫಾನ ಮನೆಗೆ ಬಂದಿದ್ದಾನೆ ಎನ್ನಲಾಗಿದೆ. ಈ ನಡುವೆ ರೊಚ್ಚಿಗೆದ್ದ ಮುಸ್ತಫಾ, ಸುಲೇಮಾನ್​ ಜೊತೆ ಜಗಳ ಮಾಡಿ ಸುಲೇಮಾನ್​ನನ್ನು ...

ಬೆಂಗಳೂರು: ಹವಾಮಾನ ಇಲಾಖೆ (Meteorological Department information) ಪ್ರಕಾರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಿಗೆ ಮೇ 20 ರವರೆಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಗೆ ಮೇ 19 ರಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಗುಡುಗು ಸಹಿತ ಮಳೆಯಾಗುವ (Rain)  ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ಉಡುಪಿ ...

ಬೆಂಗಳೂರು: ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ (Divya Vasantha) ವಿರುದ್ದ ದೂರು ದಾಖಲಾಗಿದೆ. ಸ್ವಯಂ ಘೋಷಿತ ಗುರೂಜಿ ಆನಂದ ಎನ್ನುವವವರ ಕಾರು ಅಡ್ಡಗಟ್ಟಿ ಅ***ಶ್ಲೀಲ ಪದಗಳಿಂದ ನಿಂದಿಸಿ ಹಣಕ್ಕಾಗಿ ಬೆದರಿಸಿ ಬ್ಲ್ಯಾಕ್ ಮೇಲ್ ಹಾಗೂ ಜೀವಬೆದರಿಕೆ ಹಾಕಿದ್ದಾಳೆ ಈ ವಸಂತ ಎನ್ನಲಾಗಿದೆ. ಈ ಸಂಬಂಧ ಆನಂದ ಎನ್ನುವವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆಕೆಯ ವಿರುದ್ದ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸದ್ಯ ಚಿಕ್ಕಜಾಲ ...

ಬೆಂಗಳೂರು: ಕರ್ನಾಟಕದ ಆರು ಜಿಲ್ಲೆಗಳಲ್ಲಿ ಗುರುವಾರ ಬೆಳಗಿನ ಜಾವ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಹಲವಾರು ಸರ್ಕಾರಿ ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳನ್ನು ಗುರಿಯಾಗಿಸಿಕೊಂಡಿ ಈ ದಾಳಿ ನಡೆದಿದೆ ಎನ್ನಲಾಗಿದೆ.  ತುಮಕೂರು, ಮಂಗಳೂರು, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಯಾದಗಿರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸಲಾಯಿತು ಎನ್ನಲಾಗಿದೆ. ಪರಿಶೀಲನೆಗೆ ಒಳಗಾದ ಅಧಿಕಾರಿಗಳಲ್ಲಿ ತುಮಕೂರಿನ ನಿರ್ಮಿತಿ ಕೇಂದ್ರದ ನಿರ್ದೇಶಕಿ, ದಕ್ಷಿಣ ಕನ್ನಡದ ಮಂಗಳೂರಿನ ಸರ್ವೆ ಮೇಲ್ವಿಚಾರಕಿ ಮತ್ತು ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ರೇಣುಕಾ ಸತಾರಾಳೆ ಸೇರಿದ್ದಾರೆ. ರಾಜ್ಯಾದ್ಯಂತ ಲೋಕಾಯುಕ್ತ ...

ಉಡುಪಿ: ತಂದೆಗೆ ಅನ್ನ ಹಾಕುವ ಯೋಗ್ಯತೆಯೂ ಇಲ್ಲ ಅಂತ ಚೈತ್ರಾ ಕುಂದಾಪುರ ತಂದೆ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಚೈತ್ರಾ ಕುಂದಾಪುರ (Chaitra Kundapura) ತಂದೆ ಬಾಲಕೃಷ್ಣ ನಾಯ್ಕ್ ತಮ್ಮ ಮಗಳ ಮದುವೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಮಾತನಾಡಿ, ನನ್ನ ಆಕೆ ಮದುವೆಗೆ ತನ್ನನ್ನು ಆಹ್ವಾನಿಸಲಿಲ್ಲ ಅಂತ ಹೇಳಿದ ಅವರು ಪತ್ನಿಯ ವಿರುದ್ಧವೂ ಗಂಭೀರ ಆರೋಪ ಮಾಡಿರುವ ಅವರು ನನ್ನ ಪತ್ನಿಯೂ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಹೆಂಡತಿಗೆ ಗೌರವ ಬೇಕಾಗಿಲ್ಲ. ಹಣವಿದ್ದರೆ ಸಾಕು. ...

ಶಿವಮೊಗ್ಗ: ದೂರುದಾರರಾದ ಕಾಶಿಪುರದ ಎಸ್.ಮನೋಜ್ ಇವರು ಬ್ರಾö್ಯಂಚ್ ಮ್ಯಾನೇಜರ್, ರಿಲಯನ್ಸ್ ರಿಟೇಲ್ ಲಿಮಿಟೆಡ್, ಶಿವಮೊಗ್ಗ ಹಾಗೂ ರೀಜನಲ್ ಮ್ಯಾನೇಜರ್, ರಿಲಯನ್ಸ್ ರಿಟೇಲ್ ಲಿಮಿಟೆಡ್, ಬೆಂಗಳೂರು ಇವರುಗಳ ವಿರುದ್ಧ ಲ್ಯಾಪ್‌ಟಾಪ್ ರಿಪೇರಿಗೆ ಸಂಬAಧಿಸಿದ ಸೇವಾನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಲ್ಲಿಸಿದ ದೂರನ್ನು ಆಲಿಸಿದ ಆಯೋಗ 45 ದಿನಗಳ ಒಳಗೆ ರಿಪೇರಿ ಮಾಡಿಕೊಡುವಂತೆ ಇಲ್ಲವಾದಲ್ಲಿ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.  ಇದನ್ನು ಮಿಸ್‌ ಮಾಡದೇ ಓದಿ: ಪಂದ್ಯ ಧರ್ಮಶಾಲಾದಿಂದ ಅಹಮದಾಬಾದ್‌ಗೆ ಸ್ಥಳಾಂತರ ದೂರುದಾರರು ತಮ್ಮ ಮಗನ ವಿದ್ಯಾಭ್ಯಾಸಕ್ಕಾಗಿ 1ನೇ ಎದುರುದಾರರಿಂದ ದಿನಾಂಕ:12/05/2022 ರಂದು ...

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ‌ ಭಯೋತ್ಪಾದಕ ದಾಳಿಗೆ ಭಾರತ ಆಪರೇಷನ್ ಸಿಂಧೂರ (Operation Sindhura) ಎನ್ನುವ ಹೆಸರಿನಡಿಯಲ್ಲಿ ಪಾಕ್‌ ಮೇಲೆ ಭಾರತದ (india) ಸೇನೆ ಮುಗಿ ಬೀಳುತ್ತಿದ್ದು, ಪಾಕ್‌ಗೆ ನಡುಕ ಹುಟ್ಟಿಸಿದೆ. ಈ ನಡುವೆ ಮೊನ್ನೆ ಸಿಂಧೂರದ ಭಾಗವಾಗಿ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲು ಸೂಚನೆ ನೀಡಿದ್ದಾರೆ. ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲು ಸಚಿವ ರಾಮಲಿಂಗರೆಡ್ಡಿಯವರು ಆದೇಶದಂತೆ ರಾಜ್ಯದ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದೆ. ಈ ನಡುವೆ ನಾಳೆ ಶುಕ್ರವಾರ(may 09) ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸಚಿವ ಬಿ ...

ಮಂಡ್ಯ: ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆಗಳ ಮೇಲೆ ಭಾರತ ದಾಳಿಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಎಲ್ಲೆಡೆ ಅಣುಕು ಕವಾಯತು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ (Chief Minister ) ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮದ್ದೂರು ಕಾಫಿ ಡೇ ಹತ್ತಿರದ ಗೆಜ್ಜಲಗೆರೆ ಹೆಲಿಪ್ಯಾಡ್ ನಲ್ಲಿ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮವದರೊಂದಿಗೆ ಮಾತನಾಡಿದರು. ಎಲ್ಲೆಡೆ ಎಚ್ಚರಿಕೆ: ಅಣೆಕಟ್ಟುಗಳ ಸುರಕ್ಷತೆಯ ದೃಷ್ಟಿಯಲ್ಲಿ ಎಲ್ಲೆಡೆ ಎಚ್ಚರಿಕೆ ನೀಡಲಾಗಿದ್ದು, ಯಾವ ಘಳಿಗೆಯಲ್ಲಿ ಏನಾದರೂ ಆಗಬಹುದು ಎಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ದೇವಾಲಯಗಳಲ್ಲಿ ಪೂಜೆ: ಮುಜರಾಯಿ ಇಲಾಖೆ ...