Darshan Thoogudeepa | ನಟ ದರ್ಶನ್‌ಗೆ ಮತ್ತೊಂದು ‘ಬಿಗ್‌ಶಾಕ್‌’: ಕೋರ್ಟ್ ನಿಂದ ಸಮನ್ಸ್ ಜಾರಿ

ಬೆಂಗಳೂರು: ವಿದೇಶಿ ಬಾತುಕೋಳಿ ಸಾಕಿದ್ದ ನಟ ದರ್ಶನ್‌ ಮತ್ತು ಆತನ ಪತ್ನಿ ವಿಜಯ್ ಲಕ್ಷ್ಮಿ, ಹಾಗೂ ತೋಟವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜ್‌ ಅವರ ವಿರುದ್ದ ದೂರು ದಾಖಲಾಗಿತ್ತು. ಇದೇ ವೇಳೇ ಪ್ರಕರಣ ಸಂಬಂಧ ಜುಲೈ 4ರಂದು ವಿಚಾರಣೆಗೆ ಹಾಜರಾಗುವಂತೆ ಟಿ.ನರಸೀಪುರ ಕೋರ್ಟ್‌ನಿಂದ ಸಮನ್ಸ್‌ ಜಾರಿಯಾಗಿದೆ ಎನ್ನಲಾಗಿದೆ. 

actor darshan farm house migratory birds

ಎರಡು ವರ್ಷದ ಹಿಂದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಡಬ್ಲ್ಯುಪಿಎನ ಶೆಡ್ಯೂಲ್ 2ರ ಅಡಿಯಲ್ಲಿ ಬರುವ 4 ಬಾರ್ ಹೆಡೆಡ್ ಬಾತುಗಳನ್ನು ದರ್ಶನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕುತ್ತಿದ್ದರು. ಪಕ್ಷಿಗಳನ್ನು ವಶಪಡಿಸಿಕೊಂಡಿದ್ದ ಅರಣ್ಯಾಧಿಕಾರಿಗಳು ನಂತರ ನ್ಯಾಯಾಲಯದ ಅನುಮತಿ ಪಡೆದು ಮೈಸೂರು ಸಮೀಪದ ಕೆರೆಗಳಲ್ಲಿ ಪಕ್ಷಿಗಳನ್ನು ಬಿಟ್ಟಿದ್ದರು.

actor darshan farm house migratory birds